ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಜೈಪುರ (ರಾಜಸ್ಥಾನ): ಹಲವು ಜಾಗೃತಿಗಳ ಹೊರತಾಗಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಅಮಾಯಕರು ಜನರು ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನರಿಗೆ ತಿಳಿಯದಂತೆ ಅವರನ್ನು ಈ ವಂಚನೆಗೆ ವಂಚಕರು ಸಿಲುಕಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರಾಜಸ್ಥಾನ ಪೊಲೀಸ್ ಡಿಜಿಪಿ ರಾಜೀವ್ ಕುಮಾರ್ ಶರ್ಮಾ ಅವರ ಸೂಚನೆ ಮೇಲೆರೆ ಸೈಬರ್ ಅಪರಾಧ ವಿಭಾಗವು ಸೈಬರ್ ವಂಚನೆ ಕುರಿತು ಜನರಿಗೆ ಮತ್ತೊಮ್ಮೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಈ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಿದೆ.
ಸೈಬರ್ ಅಪರಾಧಿಗಳು ಜನರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ಮಾಡಲು ನವೀನ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಸೈಬರ್ ಅಪರಾಧ ವಿಭಾಗದ ಡಿಐಜಿ ಶಾಂತನು ಕುಮಾರ್ ಸಿಂಗ್ ತಿಳಿಸಿದ್ದಾರೆ. ಆ ಹೊಸ ತಂತ್ರಗಳು ಯಾವುದು, ಜನರು ಎಲ್ಲಿ ಮೋಸ ಹೋಗುವುದು. ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಮಾಹಿತಿ ನೀಡಿದರು.
ಪೊಲೀಸ್ ಪ್ರಧಾನ ಕಚೇರಿಯ ಸೈಬರ್ ಅಪರಾಧ ವಿಭಾಗದ ಸಿಐ ಗಜೇಂದ್ರ ಶರ್ಮಾ ವಿವರಿಸುವಂತೆ, ಸೈಬರ್ ಅಪರಾಧಿಗಳು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಉದ್ಯಾನವನಗಳು ಮತ್ತು ಪ್ರವಾಸಿ ತಾಣಗಳಲ್ಲಿ ಪ್ರಮುಖ ಕರೆ ಬಂದಂತೆ ನಟಿಸಿ ಸಾಮಾನ್ಯ ಜನರ ಮೊಬೈಲ್ ಫೋನ್ ಪಡೆಯುತ್ತಾರೆ. ಈ ಫೋನ್ ಸಿಕ್ಕ ಕೆಲವೇ ಗಂಟೆಗಳಲ್ಲಿ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಾರೆ.
ಅತ್ಯಂತ ಅಪಾಯಕಾರಿ ವಿಧಾನವೆಂದರೆ ಕರೆ ಫಾರ್ವರ್ಡ್ ಮಾಡುವ ವಂಚನೆ. ವಂಚಕರು ನಿಮ್ಮ ಮೊಬೈಲ್ ಫೋನ್ನಿಂದ ಕೋಡ್ ಡಯಲ್ ಮಾಡುತ್ತಾರೆ. ನಿಮ್ಮ ಫೋನ್ಗೆ ಒಟಿಪಿಗಳನ್ನು ನೇರವಾಗಿ ಅವರ ಸಂಖ್ಯೆಗೆ ಕಳುಹಿಸುತ್ತಾರೆ. ನಂತರ ಅವರು ನಿಮ್ಮ ಬ್ಯಾಂಕ್ ಖಾತೆ, ವಾಟ್ಸ್ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮವನ್ನು ಸುಲಭವಾಗಿ ಪ್ರವೇಶಿಸುತ್ತಾರೆ.
ಮೊಬೈಲ್ ಬೇಹುಗಾರಿಕೆ: ಇದಲ್ಲದೇ, ಕೆಲವೊಮ್ಮೆ ಸ್ಕ್ಯಾಮರ್ಗಳು ನಿಮ್ಮ ಫೋನ್ನಲ್ಲಿ ಸ್ಪೈವೇರ್ ಅಥವಾ ಕೀಲಾಗರ್ಗಳನ್ನು ವಿವೇಚನೆಯಿಂದ ಬಳಕೆ ಮಾಡುತ್ತಾರೆ. ಈ ಮೂಲಕ ಪ್ರತಿಯೊಂದು ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಪಾಸ್ವರ್ಡ್ಗಳು, ಬ್ಯಾಂಕ್ ವಿವರಗಳು ಮತ್ತು ಖಾಸಗಿ ಚಾಟ್ಗಳೆಲ್ಲವೂ ಅವರಿಗೆ ಪ್ರವೇಶಿಸಬಹುದಾಗಿದೆ. ಇದಲ್ಲದೇ, ಅವರು ನಿಮ್ಮ ಸಂಪರ್ಕಗಳನ್ನು ಕದಿಯಬಹುದು. ತುರ್ತು ಪರಿಸ್ಥಿತಿಯಲ್ಲಿರುವಂತೆ ನಟಿಸುವಂತೆ ಮೋಸಗೊಳಿಸಬಹುದು. ಇದರಿಂದ ಹಣವನ್ನು ಸುಲಿಗೆ ಮಾಡಬಹುದು. ಯಾವುದೇ ಕಾನೂನುಬಾಹಿರ ಚಟುವಟಿಕೆಗಾಗಿ ಅಪರಾಧಿಯು ನಿಮ್ಮ ಫೋನ್ನಿಂದ ಕರೆ ಮಾಡಿದರೆ, ತನಿಖೆಯ ವೇಳೆ ಇದು ಬಹಿರಂಗಗೊಳ್ಳುತ್ತದೆ.



