ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಮರುಜೀವ

0
9

Updated By: Priyalachhi

2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಆದ್ಯತೆ ನೀಡಿದ್ದಾರೆ. ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಬಜೆಟ್​​ನಲ್ಲಿ ಇರುವ ಪ್ರಮುಖ ಅಂಶಗಳು ಹೀಗಿವೆ.

  • ಅಲೈಡ್ ಹೆಲ್ತ್ ಪ್ರೊಫೆಷನಲ್ (AHP) ಸಂಸ್ಥೆಗಳ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವಿಕೆ
  • ಆಪ್ಟೋಮೆಟ್ರಿ, ರೇಡಿಯಾಲಜಿ, ಅರಿವಳಿಕೆ, ಒಟಿ ತಂತ್ರಜ್ಞಾನ, ಅನ್ವಯಿಕ ಮನೋವಿಜ್ಞಾನ ಮತ್ತು ನಡವಳಿಕೆಯ ಆರೋಗ್ಯ ಸೇರಿದಂತೆ 10 ವಿಭಾಗಗಳ ವ್ಯಾಪ್ತಿ
  • ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಎಹೆಚ್​​ಪಿಗಳ ಸೇರ್ಪಡೆ

ಇದರ ಜೊತೆಗೆ, ವೃದ್ಧಾಪ್ಯದ ಮತ್ತು ಸಂಬಂಧಿತ ಆರೈಕೆಗಾಗಿ ಮುಂದಿನ ಒಂದು ವರ್ಷದಲ್ಲಿ 1.5 ಲಕ್ಷ ಆರೈಕೆದಾರರಿಗೆ ತರಬೇತಿ ನೀಡಲಾಗುವುದು. ಈ ಆರೈಕೆದಾರರು ಬಹು ವಿಧಗಳಲ್ಲಿ ಕಾರ್ಯನಿವಹಿಸಲಿದ್ದಾರೆ. ಅವರಿಗೆ ಆರೈಕೆಯಲ್ಲಿ ಮಾತ್ರವಲ್ಲ, ಯೋಗಕ್ಷೇಮ, ಯೋಗ ಮತ್ತು ವೈದ್ಯಕೀಯ ಮತ್ತು ಸಹಾಯಕ ಸಾಧನಗಳನ್ನು ಬಳಸಲು ತರಬೇತಿ ನೀಡಲಾಗುವುದು.

ಕೇಂದ್ರ ಹಣಕಾಸು ಸಚಿವರ ಭಾಷಣದಲ್ಲಿನ ಅತ್ಯಂತ ಮಹತ್ವದ ವಿಷಯಗಳಲ್ಲಿ ತಂತ್ರಜ್ಞಾನ ಅಥವಾ ರಫ್ತು. ದೇಶದ ಬಡ ಕುಟುಂಬಗಳು ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಅಪಘಾತ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇವು ಈಗಿನ ಸಂಖ್ಯೆಗಿಂತ ಶೇಕಡಾ 50ರಷ್ಟು ಹೆಚ್ಚು. ಇದು ಬಡವರಿಗೆ ನೆರವಾಗುವ ಆರೋಗ್ಯ ರಕ್ಷಣಾ ನೀತಿಯಾಗಿದೆ ಎಂದು ಸರ್ಕಾರ ಬಜೆಟ್​ನಲ್ಲಿ ತಿಳಿಸಿದೆ.

ಮಾನಸಿಕ ಆರೋಗ್ಯಕ್ಕೆ ಕಾಯಕಲ್ಪ: ದೇಶದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಭಿಯಾನಗಳು ಮತ್ತು ಸಹಾಯವಾಣಿಗಳು ಮಾತ್ರ ಚಾಲ್ತಿಯಲ್ಲಿವೆ. ಈ ಬಜೆಟ್​​ನಲ್ಲಿ ಇದಕ್ಕೆ ಸ್ವಲ್ಪ ಬದಲಾವಣೆ ತರಲಾಗಿದೆ. ರಾಂಚಿ ಮತ್ತು ತೇಜ್‌ಪುರದಲ್ಲಿ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ನಿಮ್ಹಾನ್ಸ್-2 ಯೋಜನೆಯಡಿ ಆರಂಭಿಸಲು ಘೋಷಿಸಲಾಗಿದೆ. ಈವರೆಗೂ ದೇಶದ ಏಕೈಕ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಬೆಂಗಳೂರಿನಲ್ಲಿದೆ.

15 ರಿಂದ 24 ವರ್ಷ ವಯಸ್ಸಿನ ಯುವ ಭಾರತೀಯರಲ್ಲಿ ಹೆಚ್ಚುತ್ತಿರುವ ಆತಂಕ, ಖಿನ್ನತೆ ಮತ್ತು ಸಾಮಾಜಿಕ, ಮಾಧ್ಯಮ-ಸಂಬಂಧಿತ ಯಾತನೆಯ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಎಚ್ಚರಿಕೆ ನೀಡಿದ ಬಳಿಕ ನಿಮ್ಹಾನ್ಸ್ ಸ್ಥಾಪನೆಗೆ ಮುಂದಾಗಲಾಗಿದೆ.

ವೈದ್ಯಕೀಯ ಪ್ರವಾಸೋದ್ಯಮ: ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಆಸ್ಪತ್ರೆಗಳು, ಸಂಶೋಧನೆ, ಶಿಕ್ಷಣ, ಆಯುಷ್ ಕೇಂದ್ರಗಳು, ರೋಗನಿರ್ಣಯ ಮತ್ತು ಪುನರ್ವಸತಿಗಳನ್ನು ಇದು ಸಂಯೋಜಿಸುತ್ತದೆ.

ಆಯುರ್ವೇದಕ್ಕೆ ಮರುಜೀವ: 2026 ರ ಬಜೆಟ್‌ನ ಪ್ರಮುಖ ಅಂಶಗಳಲ್ಲಿ, ಆಯುರ್ವೇದಕ್ಕೆ ಮರುಜೀವನ ನೀಡುವ ಯೋಜನೆ. ದೇಶದಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳು, ನವೀಕರಿಸಿದ ಆಯುಷ್ ಔಷಧಾಲಯಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳು, ಜಾಮ್‌ನಗರದಲ್ಲಿ ಉದ್ದೇಶಿಸಲಾದ WHO ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ. ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸುವ ರೈತರು, ಅವುಗಳ ಉತ್ಪನ್ನಗಳನ್ನು ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಉದ್ದೇಶಿಸಲಾಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here