ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿದ ಜಮೀರ್​​​​​​ ಅಹ್ಮದ್​​​​​ ಖಾನ್

0
26

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ದಾವಣಗೆರೆ: ವಸತಿ ಸಚಿವ ಜಮೀರ್​​​ ಅಹ್ಮದ್​​​ ಖಾನ್​​​ ಅವರನ್ನು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕರೆಸಿ ಅಭಿಮಾನಿಗಳ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ.

ಮುಸ್ಲಿಂ ಮತಗಳ ಮೇಲೆ ಜಮೀರ್ ಕಣ್ಣಿಟ್ಟಿದ್ದು, ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಲು ಕೆಪಿಸಿಸಿ ಬಳಿ ಪಟ್ಟಿ ಕೇಳಿದ್ದಾರೆ. ಅಲ್ಲದೇ, ನೇರವಾಗಿ ಎಸ್‌.ಎಸ್.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿ, ನಾನು-ಮಲ್ಲಣ್ಣ ಚಡ್ಡಿ ದೋಸ್ತ್​ಗಳೆಂದು ಕೈ ಹಿಡಿದು ಮೇಲಕ್ಕೆತ್ತಿ ವಿಜಯದ ಸಂಕೇತ ಸೂಚಿಸಿದರು.

ಇದಕ್ಕೂ ಮುನ್ನ ಹುಬ್ಬಳ್ಳಿಯಿಂದ ದಾವಣಗೆರೆಗೆ ಆಗಮಿಸಿದ ಜಮೀರ್​ ಅವರನ್ನು ಅಭಿಮಾನಿಗಳು ಬೃಹತ್ ಮೆರವಣಿಗೆ ಮೂಲಕ ಎಸ್.​ಎಸ್.ಮಲ್ಲಿಕಾರ್ಜುನ್ ಮನೆಗೆ ಕರೆತಂದರು. ಬಳಿಕ ಮಲ್ಲಿಕಾರ್ಜುನ್ ನಿವಾಸದಲ್ಲಿ ಊಟ ಮಾಡಿ, ಪತ್ರಿಕಾಗೋಷ್ಠಿ ನಡೆಸಿದರು.

ನಾನು-ಮಲ್ಲಿಕಾರ್ಜುನ್​​ ದೋಸ್ತ್​ಗಳು, ಮುನಿಸಿಕೊಂಡಿಲ್ಲ-ಜಮೀರ್: “ಕೇರಳಕ್ಕೆ ಸ್ಟಾರ್ ಕ್ಯಾಂಪೇನರ್ ಆಗಿ ಹೋಗಿದ್ದೆ. ಎಸ್.​ಎಸ್.ಮಲ್ಲಿಕಾರ್ಜುನ್​ ಅವರ ವಿರುದ್ಧ ನಾನು ಯಾವತ್ತೂ ಮುನಿಸಿಕೊಂಡಿಲ್ಲ. ನನಗೆ ಕೇರಳದಲ್ಲಿ 7ರ ತನಕ ಪ್ರಚಾರ ಮಾಡಲು ವೇಣುಗೋಪಾಲ್​ ಹೇಳಿದ್ದರು. ಹಾಗಾಗಿ, ಇದೀಗ ಬಂದಿದ್ದೇನೆ. ನಮ್ಮ ಅಭ್ಯರ್ಥಿ ಸಮರ್ಥ್ ಅವರನ್ನು ಗೆಲ್ಲಿಸಿಕೊಂಡು ಬರ್ತೀನಿ. ನನ್ನನ್ನು ಅಭಿಮಾನಿಗಳು ಕರೆತಂದಿದ್ದು ರೋಡ್​ ಶೋ ಥರಾನೇ ಆಯ್ತು. ನೂರಕ್ಕೆ ನೂರರಷ್ಟು ಸಮರ್ಥ್​ ಗೆಲ್ಲುತ್ತಾರೆ. ಇವತ್ತು ಒಂದು ದಿನ ದಾವಣಗೆರೆ, ಎರಡು ದಿನ ಬಾಗಲಕೋಟೆಗೆ ಪ್ರಚಾರಕ್ಕಾಗಿ ಹೋಗುತ್ತೇನೆ. ಮತ್ತೆ ಮಲ್ಲಿಕಾರ್ಜುನ್​ ಬನ್ನಿ ಎಂದರೆ ಖಂಡಿತಾ ದಾವಣಗೆರೆಗೆ ಬರುತ್ತೇನೆ. ಕಳೆದ ಬಾರಿ ನಾಲ್ವರು ಪಕ್ಷೇತರರಿದ್ದರೂ ಮೂರು ಸಾವಿರ ಓಟ್ ತಗೊಂಡರು. ಈ ಬಾರಿ ಪಕ್ಷೇತರರನ್ನು ಕರೆಸಿ ಮನವೊಲಿಸುತ್ತೇವೆ. ಯಾರು ಬರಲಿ, ಬಿಡಲಿ ದಾವಣಗೆರೆ ದಕ್ಷಿಣ ಕಾಂಗ್ರೆಸ್​ ಭದ್ರಕೋಟೆ. ಮುಸ್ಲಿಂ ಮುಖಂಡರಲ್ಲಿ ಸ್ವಲ್ಪ ಅಸಮಾಧಾನ ಇದೆ. ಇನ್ನೂ ನಾಲ್ಕು ದಿನ ಇದೆ, ಸರಿ ಮಾಡುತ್ತೇನೆ” ಎಂದರು.

sambrama prabha editor suresh kt

LEAVE A REPLY

Please enter your comment!
Please enter your name here