Updated By: Priyalachhi
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ವಿರೋಧ ಪಕ್ಷಗಳು ಯುಪಿಎ ಯುಗದ ಎಂಜಿಎನ್ಆರ್ಇಜಿಎ ಪುನಃಸ್ಥಾಪನೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್), ಭಾರತದ ವಿದೇಶಾಂಗ ನೀತಿ ಮತ್ತು ಹೊಸ ಯುಜಿಸಿ ಮಾರ್ಗಸೂಚಿಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ರಚನಾತ್ಮಕ ಚರ್ಚೆಗೆ ಆಗ್ರಹಿಸಿದವು.
ಆದಾಗ್ಯೂ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹೊಸದಾಗಿ ಜಾರಿಗೆ ತರಲಾದ ವಿಬಿ–ಜಿ RAM ಜಿ ಕಾನೂನನ್ನು ಸರ್ಕಾರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಜೆಟ್ ಅಧಿವೇಶನದ ಪ್ರಾಥಮಿಕ ಗಮನ ಬಜೆಟ್ ಆಗಿರುತ್ತದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದು, ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಸದಸ್ಯರು ಇತರ ವಿಷಯಗಳನ್ನು ಎತ್ತಬಹುದು ಎಂದು ಅವರು ಹೇಳಿದರು.



