ಮಂಗಳವಾರದ ಪಂಚಾಂಗ, ದಿನ ಭವಿಷ್ಯ

0
12

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಇಂದಿನ ಪಂಚಾಂಗ

ದಿನಾಂಕ : 07-04-2026

ವಾರ : ಮಂಗಳವಾರ

ಸಂವತ್ಸರ : ಶ್ರೀ ಪರಾಭವ ನಾಮ

ಆಯನ : ಉತ್ತರಾಯಣ

ಪಕ್ಷ : ಕೃಷ್ಣ

ತಿಥಿ : ಪಂಚಮಿ

ನಕ್ಷತ್ರ : ಜ್ಯೇಷ್ಠ

ಸೂರ್ಯೋದಯ : ಬೆಳಗ್ಗೆ 6:10 ಗಂಟೆಗೆ

ಅಮೃತ ಕಾಲ : ಮಧ್ಯಾಹ್ನ 12:20 ರಿಂದ 01:52ರವರೆಗೆ

ದುರ್ಮುಹೂರ್ತ : ಬೆಳಗ್ಗೆ 8:34 ರಿಂದ 9:22ರವರೆಗೆ ಹಾಗೂ ಮಧ್ಯಾಹ್ನ 11:46 ರಿಂದ 12:34ರವರೆಗೆ

ರಾಹುಕಾಲ : ಮಧ್ಯಾಹ್ನ 03:25 ರಿಂದ 04:57ರವರೆಗೆ

ಸೂರ್ಯಾಸ್ತ : ಸಂಜೆ 06:30 ಗಂಟೆಗೆ

ಮೇಷ : ಇಂದು ನೀವು ಗಾಢವಾದ ನಿಗೂಢ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ. ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಆನಂದಿಸಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಈ ಅಂಶಗಳನ್ನು ವಿವರವಾಗಿ ಚರ್ಚಿಸುತ್ತೀರಿ. ನೀವು ಅಂತಹ ಮಾಹಿತಿಯನ್ನು ಶಾಂತಿಯುತ ಕಾರಣಕ್ಕೆ ಮಾತ್ರ ಬಳಸಬೇಕು, ಯುದ್ಧಕ್ಕಲ್ಲ.

ವೃಷಭ : ಇಂದು ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ ಬದಲಾಯಿಸುವವರನ್ನು ಭೇಟಿಯಾಗಬೇಡಿ ಮತ್ತು ಅಂತಹ ಕೆಲಸಗಳನ್ನು ಮಾಡಬೇಡಿ. ಪ್ರತಿಕ್ರಿಯಿಸುವುದು ಮತ್ತು ಮುನ್ನಡೆಯುವುದು ನಿಮ್ಮ ಒಳ್ಳೆಯ ಸ್ವಭಾವ. ನಿಮ್ಮ ಒಳ್ಳೆಯತನದ ದಾರಿಯಲ್ಲಿ ಯಾರೂ ಅಥವಾ ಏನೂ ಬಾರದಂತೆ ನೋಡಿಕೊಳ್ಳಿ.

ಮಿಥುನ : ನೀವು ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಅಲ್ಲದೇ ಕುಟುಂಬ ಮಾತ್ರವೇಕೆ? ನೀವು ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸಲಿದ್ದೀರಿ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಪಾತ್ರರ ಜೊತೆಯನ್ನು ಆನಂದಿಸುತ್ತಾರೆ.

ಕರ್ಕಾಟಕ : ಇಂದು ಅತ್ಯಂತ ತಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ನಿಮ್ಮ ಋಣಾತ್ಮಕ ಆಲೋಚನೆಗಳು ಮತ್ತು ನಿರ್ಣಯಗಳಿಂದ ಬರಲು ನೆರವಾಗುತ್ತದೆ ಮತ್ತು ಕೈಯಲ್ಲಿರುವ ವಿಷಯಗಳ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಿರಿ. ಅಲ್ಲದೆ ಅಡೆತಡೆಗಳ ಕುರಿತು ಗಮನ ಕಡಿಮೆ ಮಾಡಿ ಮತ್ತು ಕೆಲಸದಲ್ಲಿ ತೊಡಗಿರಿ.

ಸಿಂಹ : ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಾಧಿಕಾರಿಗಳಿಂದ ಎತ್ತರದ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇಂದು ನಿಮಗೆ ಪ್ರಮುಖವಾದ ದಿನ.

ಕನ್ಯಾ : ಕುಟುಂಬದ ಆತ್ಮೀಯ ಸದಸ್ಯರು ಮತ್ತು ಮಿತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಆಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ : ಅವಕಾಶಗಳನ್ನು ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಲಾಭ ಪಡೆಯಲು ಶಕ್ತರಾಗುತ್ತೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಚೇರಿಯಲ್ಲಿ ಸೀನಿಯರ್​ಗಳು ನಿಮಗೆ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ. ಏಕೆಂದರೆ, ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಪ್ರೀತಿ ಮತ್ತು ತೀವ್ರ ಆಸಕ್ತಿ ಜೀವನ ಇಂದು ಕೂಡಾ ಭಿನ್ನವಾಗಿಲ್ಲ. ದಿನವನ್ನು ಯೋಜಿಸುವಾಗ ನೀವು ಇದನ್ನು ಅತ್ಯಂತ ಆದ್ಯತೆಯಲ್ಲಿರಿಸುತ್ತೀರಿ. ನಿಮ್ಮ ಗಡಿಗಳನ್ನು ತಿಳಿದಿರುವವರೆಗೂ ಅದರಿಂದ ಏನೂ ತೊಂದರೆಯಿಲ್ಲ.

ಧನು : ನೀವು ಇಂದು ಅತ್ಯಂತ ಸ್ಥಿರ ಮತ್ತು ಸಂಘಟಿತರಾಗಿರುತ್ತೀರಿ. ಕೌಟುಂಬಿಕ ವ್ಯಕ್ತಿಯಾಗಿ ನೀವು ನಿಮ್ಮ ಸಮಯವನ್ನು ಮನೆಯಲ್ಲಿ ಮತ್ತು ಕುಟುಂಬ ಕುರಿತಂತೆ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಬಳಸುತ್ತೀರಿ. ಕೆಲಸದ ವಿಷಯದಲ್ಲಿ ನೀವು ಇಂದು ಶಾಂತರಾಗಿರುತ್ತೀರಿ. ಸಂಜೆಯಲ್ಲಿ ನಿಸರ್ಗದ ಸೌಂದರ್ಯ ಮತ್ತು ಪ್ರಶಾಂತತೆ ಅನುಭವಿಸಿ.

ಮಕರ : ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಅದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ : ನೀವು ಎಂದಿನಂತೆ ಪತ್ರಿಕೆಯ ಓದಿನಲ್ಲಿ ತೊಡಗಿಕೊಳ್ಳುವಿರಿ. ಕೆಲವೊಮ್ಮೆ ಉತ್ತಮ ಪುಸ್ತಕಗಳನ್ನು ಸಂಗ್ರಹಿಸುವಿರಿ. ದಿನ ಪತ್ರಿಕೆಯ ಓದಿನಿಂದಾಗಿ ನಿಮಗೆ ಲೋಕಜ್ಞಾನ ಲಭಿಸಲಿದೆ. ನಿರಂತರವಾಗಿ ಓದಿ. ಇದರಿಂದ ನಿಮಗೆ ಸಂತಸ ಹೆಚ್ಚಲಿದೆ.

ಮೀನ : ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here