ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪ ಸಂಭವಿಸಿದೆ. ಅಪರಿಚಿತ ವಾಹನವೊಂದು ಭದ್ರತಾ ತಡೆಗೋಡೆಯನ್ನು (ಬ್ಯಾರಿಕೇಡ್) ಭೇದಿಸಿ ವಿಧಾನಸಭೆಯ ಆವರಣದೊಳಗೆ ನುಗ್ಗಿದ್ದು, ಈ ವೇಳೆ ವಿಧಾನಸಭೆ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ವರದಿಯಾಗಿದೆ.
ಘಟನೆಯ ವಿವರ
ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದ ವಾಹನವೊಂದು ಗೇಟ್ ಸಂಖ್ಯೆ 2ರ ಮೂಲಕ ಬಲವಂತವಾಗಿ ನುಗ್ಗಿದೆ. ಕಬ್ಬಿಣದ ಬ್ಯಾರಿಕೇಡ್ ಅನ್ನು ಡಿಕ್ಕಿ ಹೊಡೆದು ವಾಹನವು ವಿಧಾನಸಭೆಯ ಹೈ-ಸೆಕ್ಯೂರಿಟಿ ಝೋನ್ ಪ್ರವೇಶಿಸಿತ್ತು.
ಆವರಣದೊಳಗೆ ನುಗ್ಗಿದ ಚಾಲಕನು ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯತ್ತ ತೆರಳಿದ್ದಾನೆ. ಅಲ್ಲಿ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಅಚ್ಚರಿಯೆಂದರೆ, ಚಾಲಕನು ವಾಹನದಿಂದ ಕೆಳಗಿಳಿದು ಸ್ಪೀಕರ್ ಕಚೇರಿಯ ಮುಂಭಾಗ ಹೂಗುಚ್ಛವೊಂದನ್ನು (Bouquet) ಇಟ್ಟು ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯು ಮುಖವಾಡ ಧರಿಸಿದ್ದ ಎನ್ನಲಾಗಿದ್ದು, ಈ ಇಡೀ ಘಟನೆಯು ಭದ್ರತಾ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ..



