ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಪಂಚಾಂಗ
ದಿನಾಂಕ : 20-04-2026
ವಾರ : ಸೋಮವಾರ
ಸಂವತ್ಸರ : ಶ್ರೀ ಪರಾಭವ ನಾಮ
ಆಯನ : ಉತ್ತರಾಯಣ
ಪಕ್ಷ : ಶುಕ್ಲ
ತಿಥಿ : ತೃತೀಯಾ
ನಕ್ಷತ್ರ : ರೋಹಿಣಿ
ಸೂರ್ಯೋದಯ : ಮುಂಜಾನೆ 06:03 ಗಂಟೆಗೆ
ಅಮೃತ ಕಾಲ : ಮಧ್ಯಾಹ್ನ 01:50 ರಿಂದ 03:24ರ ವರೆಗೆ
ದುರ್ಮುಹೂರ್ತ : ಮಧ್ಯಾಹ್ನ 12:26 ರಿಂದ 01:14 & 02:50 ರಿಂದ 03:38ರ ತನಕ
ರಾಹುಕಾಲ : ಬೆಳಗ್ಗೆ 07:36 ರಿಂದ 09:09ರ ವರೆಗೆ
ಸೂರ್ಯಾಸ್ತ : ಸಂಜೆ 06:31 ಗಂಟೆಗೆ
ಮೇಷ : ಇಂದು ನಿಮ್ಮ ಸ್ವತ್ತುಗಳ ಕುರಿತು ಅತ್ಯಂತ ಆತಂಕ ಹೊಂದಿರುತ್ತೀರಿ, ಮತ್ತು ಅವುಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಈ ಮನಸ್ಥಿತಿ ಯಾರೋ ಒಬ್ಬರಿಂದ ಉಂಟಾಗಿರಬಹುದು. ಪ್ರೀತಿಗೆ ಸಂಬಂಧಿಸಿದ ವ್ಯವಹಾರಗಳು ಉತ್ತಮ ಪ್ರಗತಿ ಕಾಣುತ್ತವೆ, ಮತ್ತು ನಿಮ್ಮ ವೈವಾಹಿಕ ಜೀವನ ಅರಳುತ್ತದೆ.
ವೃಷಭ : ಒಂದು ಕಿರುಪ್ರವಾಸದ ಸಾಧ್ಯತೆ ಇಂದು ನಿಮಗಿದೆ. ಅದಕ್ಕೆ ಹೊರಡುವ ಮುನ್ನ, ನೀವು ನಿಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ನೀವು ಹೊಸ ವೇಳಾಪಟ್ಟಿ ಕುರಿತು ನೀವು ಸಂತೋಷವಾಗಿಲ್ಲ ಮತ್ತು ನಿಮ್ಮ ಮೊದಲ ಯೋಜನೆಗೆ ಬದ್ಧರಾಗಲು ನಿರ್ಧರಿಸುತ್ತೀರಿ, ದಿನದ ಅಂತ್ಯಕ್ಕೆ ನೀವು ವಿಚಲಿತ, ಅಹಿತದ ಭಾವನೆ ಹೊಂದುವ ಸಾಧ್ಯತೆ ಇದೆ. ಅಗತ್ಯವಿರುವ ಬದಲಾವಣೆಗಳಿಗೆ ನೀವು ಹೊಂದಿಕೊಂಡರೆ ಉತ್ತಮ, ನಂತರ ಪ್ರವಾಸವನ್ನು ಆನಂದದ ಮತ್ತ ಫಲದಾಯಕವಾಗಿಸಲು ಧನಾತ್ಮಕ ಪ್ರಯತ್ನ ನಡೆಸಬಹುದು.
ಮಿಥುನ : ನಿಮ್ಮ ಸಾಮಾಜಿಕ ವೃತ್ತದ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.
ಕರ್ಕಾಟಕ : ನೀವು ಹೊಸ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ತೇಜಸ್ಸು ಹಾಗೂ ಶಕ್ತಿಯಿಂದ ನಳನಳಿಸುತ್ತೀರಿ. ಮಿತ್ರರು ಹಾಗೂ ಬಂಧುಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ಕಾಲ ಕಳೆಯಲು ಇದು ಅತ್ಯುತ್ತಮ ಸಮಯವಾಗಿದೆ.
ಸಿಂಹ : ಒಂದು ಸವಾಲಿನ ದಿನ ನಿಮಗಾಗಿ ಕಾದಿದೆ. ನೀವು ಕೆಲ ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತೀರಿ; ಆದರೆ ನಿಮ್ಮ ಎಲ್ಲ ಕೆಲಸಗಳನ್ನೂ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಆದರೆ ನಿಮ್ಮ ಕೆಲಸದ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಮನೆ ಹಾಗೂ ಉದ್ಯೋಗದ ಸ್ಥಳದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.
ಕನ್ಯಾ : ಇಂದು ನೀವು ತೊಡಗಿಸಿಕೊಳ್ಳುವ ಯಾವುದೇ ಕೆಲಸದಲ್ಲೂ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ವಿದೇಶದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸುವ ನಿಮ್ಮ ಬಯಕೆ ಫಲ ನೀಡುತ್ತದೆ. ನಿಮ್ಮ ಸ್ವಂತ ಇಮೇಜ್ ಅನ್ನು ಗಮನಾರ್ಹವಾಗಿ ಉತ್ತಮಪಡಿಸಲು ನಿಮ್ಮ ವೈಯಕ್ತಿಕ ನೋಟದಲ್ಲಿ ಅಗತ್ಯವಾದ ಸುಧಾರಣೆಗಳನ್ನು ಮಾಡುವುದು ಅಗತ್ಯ.
ತುಲಾ : ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.
ವೃಶ್ಚಿಕ : ಭಾರತದ ಪವಿತ್ರಗ್ರಂಥಗಳು ನಮಗೆ ಅನಾದಿ ಕಾಲದಿಂದಲೂ ನಿಮ್ಮ ಕಾರ್ಯವನ್ನು ನೀವು ಮಾಡಿ, ಫಲಾಫಲಗಳ ನಿರೀಕ್ಷೆ ಮಾಡಬೇಡಿ ಎಂದು ಹೇಳಿವೆ. ಈಗ ಅದನ್ನು ಮುಖ್ಯವಾಗಿ ಕೆಲಸದಲ್ಲಿ ಅನುಷ್ಠಾನಗೊಳಿಸುವ ಕಾಲ. ನಿಮ್ಮ ವ್ಯಾಪಾರ ಮತ್ತು ಜಂಟಿ ಸಹಯೋಗದ ಉದ್ಯಮದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ.
ಧನು : ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಅಪೇಕ್ಷಿಸದ, ಆದರೆ ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ, ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.
ಮಕರ : ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.
ಕುಂಭ : ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.
ಮೀನ : ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.



