ವಾಯು ಗುಣಮಟ್ಟ ಸೂಚ್ಯಂಕ ಪ್ರಕಟ: ರಾಜ್ಯದಲ್ಲೇ ಮೈಸೂರಿಗೆ ಮೊದಲ ಸ್ಥಾನ, ದೇಶದಲ್ಲಿ 3ನೇ ಪಟ್ಟ

0
47

Updated By: Priyalachhi

ಮೈಸೂರು: ದೇಶದಲ್ಲೇ ಅತ್ಯಂತ ವ್ಯವಸ್ಥಿತ ನಗರಗಳಲ್ಲಿ ಒಂದಾದ ಸಾಂಸ್ಕೃತಿಕ ನಗರಿ ಮೈಸೂರು ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ (ವಾಯು ಗುಣಮಟ್ಟ ಸೂಚ್ಯಂಕ) ಅಂದರೆ ಶುದ್ಧ ಗಾಳಿ ಹೊಂದಿರುವ ರಾಜ್ಯದ ನಗರಗಳಲ್ಲಿ ಮೊದಲ ಸ್ಥಾನ ಹಾಗೂ ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಮೈಸೂರು ಸ್ವಚ್ಛ ನಗರಿ ಎಂಬುದನ್ನು ಸಾಬೀತುಪಡಿಸಿದೆ. ಈ ಬಗ್ಗೆ ಪಾಲಿಕೆಯ ತೋಟಗಾರಿಕೆ ಇಲಾಖೆಯ ವಿಭಾಗದ ಮುಖ್ಯಸ್ಥರಾದ ಮೋಹನ್ ಕುಮಾರ್ ಈಟಿವಿ ಭಾರತ​ಕ್ಕೆ ವಿವರಿಸಿದ್ದಾರೆ.

“ಮೈಸೂರಿನಲ್ಲಿ ಒಟ್ಟು 65 ವಾರ್ಡ್​ಗಳಿದ್ದು ವಿಜಯನಗರ ಮೂರನೇ ಹಂತ ಸಹ ಮೈಸೂರು ನಗರ ಪಾಲಿಕೆಗೆ ಸೇರುತ್ತದೆ. ಇಲ್ಲಿಯವರೆಗೆ 585 ಉದ್ಯಾನವನಗಳು ಇವೆ. ಇವುಗಳಲ್ಲಿ 332 ಉದ್ಯಾನವನಗಳನ್ನು ಗುತ್ತಿಗೆದಾರರ ಮುಖಾಂತರ ನಿರ್ವಹಣೆ ಮಾಡಲಾಗುತ್ತಿದೆ. ಹಾಗೂ ಕೆಲವು ಆಸಕ್ತ ಸಂಘ ಸಂಸ್ಥೆಗಳು, CSR ಫಂಡ್ ಹಾಗೂ ಸಾರ್ವಜನಿಕರು ದತ್ತು ತೆಗೆದುಕೊಂಡು ಸುಮಾರು 12 ರಿಂದ 13 ಪಾರ್ಕಅನ್ನು ನೋಡಿಕೊಳ್ಳುತ್ತಿದ್ದಾರೆ”.

ನಗರ ಸೌಂದರ್ಯಕ್ಕೆ ರಸ್ತೆ ಮಧ್ಯ ಹೂ ಗಿಡಗಳು: “ಕೆಲವು ಗಿಡಗಳ ಸೌಂದರ್ಯ ಸ್ವಲ್ಪ ಕುಗ್ಗಿದ್ದ ಕಾರಣ 1 ವರ್ಷದ ಹಿಂದೆ 365 ದಿನಗಳೂ ಬಾಡದಂತ ಹೂಗಳನ್ನು ನೆಡಲಾಯಿತು. ಮಳೆ ಕಡಿಮೆ ಆದರೂ ಈ ಹೂವುಗಳು ಬಾಡುವುದಿಲ್ಲ. ಅಂತಹ 13 ರಿಂದ 14 ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡು, ಸುಮಾರು 40 ಕಿಲೋ ಮೀಟರ್​ ಉದ್ದದ ರಸ್ತೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ. ಈಗಾಗಲೇ ನೋಡಿರುವ ಹಾಗೆ ಎಲ್ಲಾ ಕಡೆಯಲ್ಲೂ ರಸ್ತೆಗಳ ಅಕ್ಕ ಪಕ್ಕದ ಸ್ಥಳದಲ್ಲಿ ಹೆಚ್ಚು ಸುಂದರವಾಗಿ ಕಾಣಿಸುತ್ತದೆ ಹಾಗೂ 13 ಪ್ಯಾಕೇಜ್ ಮಾಡಿಕೊಂಡು ಗುತ್ತಿಗೆದಾರರಿಗೆ ನೀಡಲಾಗಿದ್ದು, ಇವರೇ 2 ವರ್ಷಗಳ ಕಾಲ ನಿರ್ವಹಣೆ ಮಾಡುತ್ತಿದ್ದಾರೆ”.

“ಈಗಾಗಲೇ ಗಿಡವನ್ನು ನೆಟ್ಟು 1 ವರ್ಷವಾಗಿದೆ. ಮುಂದಿನ ವರ್ಷ 1 ವರ್ಷಗಳ ಕಾಲ ನಿರ್ವಹಣೆ ಮಾಡಿ ನಂತರ ಕಾರ್ಪೊರೇಷನ್​ಗೆ ಅವುಗಳನ್ನು ಕೊಡಲಾಗುತ್ತದೆ. ಗಿಡಗಳನ್ನು ಮಗುವಿನ ಹಾಗೆ ಪೋಷಣೆ ಮಾಡಬೇಕು. ಅದಾದ ನಂತರ ನಗರಪಾಲಿಕೆ ವತಿಯಿಂದ ಕೇವಲ ನೀರನ್ನು ಹಾಕುವುದು ಹಾಗೂ ಅವುಗಳ ನಿರ್ವಹಣೆ ಕೆಲಸವನ್ನು ನಾವೇ ಮಾಡುತ್ತೇವೆ. ಒಟ್ಟಾರೆ ಗಿಡಗಳನ್ನು ನೆಡುವುದಕ್ಕೆ 2 ಕೋಟಿ ಖರ್ಚಾಗಿದೆ”.

ಪಾಲಿಕೆ ಪಾರ್ಕ್​ಗಳನ್ನು ನಿರ್ವಹಣೆ ಮಾಡುತ್ತವೆ: “ಮಹಾನಗರಪಾಲಿಕೆಯ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಪಾಲಿಕೆ ಪಾರ್ಕ್​ಗಳನ್ನು ಹೆಚ್ಚು ಮಾಡಲಾಗಿದೆ. 2023-24ರಲ್ಲಿ 290 ಪಾರ್ಕ್​ಗಳನ್ನು ಕಾಪಾಡುವ ಕೆಲಸವನ್ನು ಸಹ ಮಾಡುತ್ತಿದ್ದೇವೆ. ಈ ವರ್ಷ ಅವುಗಳನ್ನು 332ಕ್ಕೆ ಏರಿಸಿದ್ದೇವೆ. ಹಾಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವಂಥ ಕೆಲಸವನ್ನು ಸಹ ಮಾಡುತ್ತೇವೆ. ಹಾಗೂ ಇತ್ತೀಚೆಗೆ ಕೇಂದ್ರ ಸರ್ಕಾರದ ಅಮೃತ್ ಮಿತ್ರ ಯೋಜನೆ ಅಡಿಯಲ್ಲಿ ಸ್ತ್ರೀಶಕ್ತಿ ಸ್ವ–ಸಹಾಯ ಸಂಘಗಳನ್ನು ಅಳವಡಿಸಿಕೊಂಡು ಪಾರ್ಕಗಳನ್ನು ನಿಯಂತ್ರಿಸಬಹುದು. ಮತ್ತು ಇದರಲ್ಲಿ ಸುಮಾರು 10 ಪಾರ್ಕ್​ಗಳನ್ನು 6 ಪ್ಯಾಕೇಜ್​ಗಳನ್ನಾಗಿ ವಿಂಗಡಿಸಿ ಆರು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವಂತಹ ಕೆಲಸ ಮಾಡಲಾಗಿದೆ”.

ಸಂಘ ಸಂಸ್ಥೆಗಳ ಸಹಕಾರ: “ಹೆಚ್​ವಿ ರಾಜೀವ್​​ ಸ್ನೇಹ ಬಳಗ ಅವರ ವತಿಯಿಂದ ಪ್ರತಿ ವರ್ಷ ಗಿಡಗಳನ್ನು ಕೊಟ್ಟು ಸಹಕಾರ ಮಾಡಿದ್ದಾರೆ. ರಘುಲಾಲ ಮೆಡಿಕಲ್ಸ್​ ರೀ ಗಾರ್ಡ್ ಕೊಡುವಂತಹ ಒಂದು ಕೆಲಸ ಮಾಡುತ್ತಿದ್ದಾರೆ. ಹಾಗೂ ಟೊಯೋಟೊ ಕಿರ್ಲೋಸ್ಕರ್ ವತಿಯಿಂದ ಪ್ರತಿ ವರ್ಷ ಸಹಕಾರ ಮಾಡಲಾಗುತ್ತಿದೆ”.

ಸ್ವಚ್ಛ ಸರ್ವೇಕ್ಷಣ್​ನಲ್ಲಿ ನಮ್ಮ ಪಾತ್ರ: “ಈ ಬಾರಿಯ ಸ್ವಚ್ಛ ಸರ್ವೇಕ್ಷಣ್​ನಲ್ಲಿ Median beautification ಕೂಡ ಒಂದಾಗಿದೆ. ಇತ್ತೀಚಿಗೆ ಗಿಡಗಳನ್ನು ನೆಡುವುದರಿಂದ ನಮಗೆ ಪಾಯಿಂಟ್​ ಕೂಡ ಬಂದಿದೆ. ಏರ್​ ಕ್ವಾಲಿಟಿ ಇಂಡೆಕ್ಸ್ ಕೂಡ ಚೆನ್ನಾಗಿದೆ. ನಿಮಗೆ ತಿಳಿದಿರುವ ಹಾಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರತಿ ತಿಂಗಳು ನಗರಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

sambrama prabha editor suresh kt

LEAVE A REPLY

Please enter your comment!
Please enter your name here