ಚಿರತೆ ದಾಳಿಯಿಂದ ಮೃತಪಟ್ಟ ಸುಜಾತಾ ಕುಟುಂಬಕ್ಕೆ ಧನಸಹಾಯ

0
44

Updated By: Priyalachhi

ಇತ್ತೀಚೆಗೆ ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದ ನಮ್ಮ ಕಾರ್ಯ ಕರ್ತ ಬೈರೇಗೌಡರವರ ಪತ್ನಿ ಶ್ರೀಮತಿ ಸುಜಾತರವರು ದನಕರುಗಳನ್ನು ಮೇಯಿಸಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನಗೆ ಹೋಗಿ ಕುಟುಂಬಕ್ಕೆ ಸಂತ್ವಾನ ಹೇಳಿ ಕುಟುಂಬಕ್ಕೆ 50. ಸಾವಿರ ರೂಪಾಯಿ ಪರಿಹಾರ ನೀಡಿ,ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಲಾಯಿತು,ಹಾಗೂ ಇಬ್ಬರೂ ಮಕ್ಕಳ ಪೈಕಿ ಒಬ್ಬರಿಗೆ ಕುಟುಂಬ ನಿರ್ವಹಣೆಗಾಗಿ ಸರ್ಕಾರಿ ಕೆಲಸ ನೀಡುವಂತೆ ಕ್ರಮ ವಹಿಸಲು,ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರನ್ಮು ಅಗ್ರಹಿಸಲಾಯಿತು.ಹಾಗೂ ಜಿಲ್ಲಾ ಅರಣ್ಯಾಧಿಕಾರಿಗಳಾದ ಶಶಿಧರ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ರೈತರಿಗೆ/ಸಾರ್ವಜನಿಕರಿಗೆ ತೊಂದರೆಯಾಗಿರುವ ಹಿನ್ನಲೆ ಹೆಚ್ಚಾಗಿರುವ ನರಭಕ್ಷಕ ಚಿರತೆ ಹಾವಳಿಗಳನ್ನು ತಪ್ಪಿಸಲು ಟಾಸ್ಕಪೋರ್ಸ್ ರಚಿಸುವಂತೆ ಹಾಗೂ ಹೆಚ್ಚುವರಿ ಬೋನ್ ಗಳನ್ನು ಅಳವಡಿಸಲು ಕೂಡಲೇ ಕ್ರಮ ವಹಿಸಲು ಅಗ್ರಹಿಸಲಾಯಿತು
ಈ ಸಂಧರ್ಭದಲ್ಲಿ ಗ್ರಾಮದ ಸ್ಥಳೀಯ ಮುಖಂಡರುಗಳು ಹಾಗೂ ಬಿಜೆಪಿ ಪಧಾಧಿಕಾರಿಗಳು,ಗ್ರಾಮಸ್ಥರು ಗಳು ಉಪಸ್ಥಿತರಿದ್ದರು
sambrama prabha editor suresh kt

LEAVE A REPLY

Please enter your comment!
Please enter your name here