Updated By: Priyalachhi
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯವು ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್, ದೀರ್ಘಕಾಲದಿಂದ ಉಳಿದಿರುವ ನಾಯಕತ್ವದ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಬಯಸುತ್ತದೆ. ಆದರೆ ಪರಿಹಾರ ಅಷ್ಟು ಸುಲಭವಲ್ಲ. ವಾಸ್ತವವಾಗಿ, ಪರಿಸ್ಥಿತಿ ಹದಗೆಡಲು ಬೇಕಾದ ಅಂಶಗಳನ್ನು ಈಗಾಗಲೇ ರಾಜಕೀಯವೆಂಬ ರಸಕ್ಕೆ ಸೇರಿಸಲಾಗಿದೆ.
ಮೊನ್ನೆ ಶುಕ್ರವಾರ ತಡರಾತ್ರಿ ಹೈಕಮಾಂಡ್ ಸಲಹೆಯ ಮೇರೆಗೆ ನಿನ್ನೆ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಪಾಹಾರ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ಉಳಿಸಿಕೊಳ್ಳಲು ಆಶಿಸುತ್ತಿರುವ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅದಕ್ಕಾಗಿ ಪೈಪೋಟಿ ನಡೆಸುತ್ತಿರುವ ರಾಜಕೀಯ ವಾತಾವರಣ ನಡುವೆ ಉಪಹಾರ ಸಭೆ ನಡೆಯಿತು.
ಮೇ 2023 ರಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಪಕ್ಷದ ಹೈಕಮಾಂಡ್ ಕರ್ನಾಟಕ ರಾಜಕೀಯವನ್ನು ಅಗಿಯುವುದಕ್ಕಿಂತ ದೊಡ್ಡದಾಗಿ ಕಚ್ಚಿದೆ ಎಂದು ತೋರುತ್ತದೆ. ಆ ನಂತರ ಪಕ್ಷದ ಕಾರ್ಯಕರ್ತರಲ್ಲಿ ಕಂಡುಬಂದ ಸಂಭ್ರಮಾಚರಣೆಯ ಮನಸ್ಥಿತಿಯಿಂದ ಮಸುಕಾಗಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಮತದಾರರ ಕಣ್ಣುಗಳಿಂದ ಮರೆಮಾಡಲ್ಪಟ್ಟ ರಹಸ್ಯ ಒಪ್ಪಂದ ಹೆಚ್ಚು ಸದ್ದಾಗಿ, ಸುದ್ದಿಯಾಗಿ ಈಗ ಹೈಕಮಾಂಡ್ ಗೆ ಕಗ್ಗಂಟಾಗಿದೆ.
ಆ ಮಾತು, ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಮತ್ತು ಐದು ವರ್ಷಗಳ ಅವಧಿಯ ಅರ್ಧಾವಧಿಯ ನಂತರ ಡಿ ಕೆ ಶಿವಕುಮಾರ್ ಅವರನ್ನು 2025ರ ನವೆಂಬರ್ ನಂತರ ಮುಖ್ಯಮಂತ್ರಿ ಮಾಡುವುದು ಎಂಬುದು ಆ ಒಪ್ಪಂದವಾಗಿದೆ.



