ಮಂಗಳವಾರದ ಪಂಚಾಂಗ, ಭವಿಷ್ಯ

0
63

Updated By: Priyalachhi

ಪಂಚಾಂಗ:

ದಿನಾಂಕ : 09-12-2025

ವಾರ : ಮಂಗಳವಾರ

ಸಂವತ್ಸರ : ವಿಶ್ವವಸು

ಆಯನ : ದಕ್ಷಿಣಾಯಣ

ಮಾಸ : ಕಾರ್ತಿಕ

ಪಕ್ಷ : ಕೃಷ್ಣ

ತಿಥಿ : ಪಂಚಮಿ

ನಕ್ಷತ್ರ : ಆಶ್ಲೇಷ

ಸೂರ್ಯೋದಯ : ಮುಂಜಾನೆ 06:28 ಗಂಟೆಗೆ

ಅಮೃತ ಕಾಲ : ಮಧ್ಯಾಹ್ನ 12:10 ರಿಂದ 13:35 ರವರೆಗೆ

ದುರ್ಮುಹೂರ್ತ : ಬೆಳಗ್ಗೆ 08:53 ರಿಂದ 09:41 & ಮಧ್ಯಾಹ್ನ 12:5 ರಿಂದ 12:53 ರವರೆಗೆ

ರಾಹುಕಾಲ : ಮಧ್ಯಾಹ್ನ 03:00 ರಿಂದ ಸಂಜೆ 04:25 ರವರೆಗೆ

ಸೂರ್ಯಾಸ್ತ : ಸಂಜೆ 05:49 ಗಂಟೆಗೆ

ರಾಶಿ ಭವಿಷ್ಯ:

ಮೇಷ : ನೀವು ನಿಮ್ಮ ಆರೋಗ್ಯದತ್ತ ಗಮನ ನೀಡಬೇಕು, ಮತ್ತು ಕೊನೆಗೂ ನೀವು ಪಥ್ಯ ಮತ್ತು ವ್ಯಾಯಾಮದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೀರಿ. ಆದರೆ, ಇಂದು ನೀವು ಹೊಸದು ಅಥವಾ ಭಿನ್ನವಾದ ಆಹಾರ ಸೇವಿಸಲು ಬಯಸಬಹುದು. ಬಹಳ ಕಾಲದಿಂದ ನಿರ್ಲಕ್ಷಿಸುತ್ತಿರುವ ನಿಮ್ಮ ಹಳೆಯ ಮಿತ್ರರೊಂದಿಗೆ ಹೊರಗಡೆ ಹೋಗಿರಿ.

ವೃಷಭ : ನೀವು ನಿಮ್ಮ ಹತ್ತಿರದ ಮಿತ್ರರ ಅದರಲ್ಲೂ ವಿರುದ್ಧ ಲಿಂಗಿಗಳ ಕುರಿತು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದೀರಿ. ದಿಢೀರನೆ ನಿಮಗೆ ನೀವು ಪ್ರೀತಿಯಲ್ಲಿದ್ದೀರಿ ಎಂದು ಅರಿವಾಗಬಹುದು. ಅಕಸ್ಮಾತ್ತಾಗಿ ಪ್ರಣಯದ ಸಾಧ್ಯತೆಯೂ ಇದೆ, ಮುನ್ನುಗ್ಗಿರಿ ಮತ್ತು ಪ್ರೀತಿಯ ಕೊಳದಲ್ಲಿ ಧುಮುಕಿರಿ. ನೀವು ಆಲೋಚಿಸಿದ್ದಕ್ಕಿಂತ ಬೇಗನೆ ನಿಮ್ಮ ವಿವಾಹ ಆಗುವುದು ನಿಶ್ಚಿತವಾಗಿದೆ. ಇಂದು, ಎಲ್ಲ ವೃಷಭಗಳೂ ಪ್ರಣಯದ ಪ್ರೀತಿಪೂರಕ ಸುವಾಸನೆ ಬೀರುತ್ತಿವೆ.

ಮಿಥುನ : ಜನರು ನಿಮ್ಮಿಂದ ಅತಿಯಾದ ನಿರೀಕ್ಷೆ ಮಾಡುತ್ತಾರೆ ಮತ್ತು ಪ್ರತಿ ನಿರೀಕ್ಷೆಯನ್ನೂ ಉಳಿಸಿಕೊಳ್ಳುವುದು ಕಿರಿಕಿರಿ ಉಂಟು ಮಾಡುತ್ತದೆ. ಆದಾಗ್ಯೂ, ನೀವು ಪ್ರತಿ ಬೇಟಿಕೆಯನ್ನೂ ಉಳಿಸಿಕೊಳ್ಳಲು ಇಚ್ಛೆ ಮತ್ತು ದಾರಿಯನ್ನು ಕಂಡುಕೊಳ್ಳುತ್ತೀರಿ. ಜನರು ನಿಮ್ಮ ಆವಿಷ್ಕಾರ ಮತ್ತು ಬುದ್ಧಿಮತ್ತೆಯನ್ನು ಗುರುತಿಸುತ್ತಾರೆ ಮತ್ತು ಶ್ಲಾಘಿಸುತ್ತಾರೆ.

ಕರ್ಕಾಟಕ : ಬದಲಾವಣೆ ತನ್ನ ದಾರಿಯಲ್ಲಿದೆ ಮತ್ತು ನೀವು ನಿಮ್ಮನ್ನು ಇಂದು ಗಮನಿಸಿಕೊಳ್ಳಿರಿ. ಶಾಂತಿ ಮತ್ತು ತಾಳ್ಮೆಯಿಂದಿರಿ. ನೀವು ಪರಿಸ್ಥಿತಿಗಳಲ್ಲಿ ಬದಲಾವಣೆಗಳಿಗೆ ಹೊಂದಿಕೊಂಡರೆ ನಿಮ್ಮ ಕೆಲಸ ಸಾಕಷ್ಟು ಸುಲಭವಾಗುತ್ತದೆ. ಇಂದು ಯಶಸ್ವಿಯಾಗಲು ಮುಖ್ಯವಾದುದು ವಿನೋದ ಮತ್ತು ಮನರಂಜನೆ.

ಸಿಂಹ : ನೀವು ಇಂದು ಎಲ್ಲ ಮೂಲೆಗಳಿಂದಲೂ ಪ್ರಶಂಸೆಗಳನ್ನು ಪಡೆಯುತ್ತೀರಿ. ನೀವು ಇಂದು ಏನಾಗುತ್ತದೋ ಅದರಿಂದ ಇಡಿಯಾಗಿ ಸಂತೋಷಗೊಳ್ಳುವುದಿಲ್ಲ. ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ನಿರೀಕ್ಷೆ ಮಾಡುತ್ತೀರಿ. ವೈಯಕ್ತಿಕ ನಷ್ಟದಿಂದ ನೀವು ಭಾವುಕರಾಗುತ್ತೀರಿ.

ಕನ್ಯಾ : ನಿಮ್ಮ ವೈಯಕ್ತಿಕ ಜೀವನ ಇಂದು ನಿಮ್ಮ ಮುಖ್ಯ ಗಮನ ಸೆಳೆಯುತ್ತದೆ. ನಿಮ್ಮ ಆಲೋಚನೆಗಳು ಅವುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಕುರಿತಂತೆ ತುಂಬಿರುತ್ತವೆ. ವ್ಯಾಪಾರಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು. ಸಂಜೆ ನಿಮಗೆ ಒತ್ತಡರಹಿತ ಸಮಯ ತರಬಹುದು. ನೀವು ಇಂದು ನಿಮ್ಮ ಪೂಜೆಯ ಸ್ಥಳಕ್ಕೆ ಭೇಟಿ ನೀಡಬಹುದು.

ತುಲಾ : ನೀವು ಇಂದು ಹಲವು ಮೂಡ್ ಗಳಲ್ಲಿರುತ್ತೀರಿ ಮತ್ತು ನಿಮ್ಮ ಪಾದರಸದಂತಹ ಪ್ರವೃತ್ತಿಗಳು ಸಂಜೆಯವರೆಗೂ ಉಳಿಯುತ್ತವೆ. ಸಂಜೆಯ ನಂತರ ನಿಮಗೆ ಆಶ್ಚರ್ಯವೊಂದು ಕಾದಿರುತ್ತದೆ. ಅತ್ಯಂತ ಉತ್ತಮವಾದುದು ನಡೆಯುವುದನ್ನು ನಿರೀಕ್ಷೆ ಮಾಡುವಂತೆಯೇ ಕೆಟ್ಟದಾಗಿರುವುದಕ್ಕೆ ಸಜ್ಜಾಗಿರಿ.

ವೃಶ್ಚಿಕ : ನಿಮ್ಮ ಪ್ರಭಾವ ನಿಮ್ಮ ಸುತ್ತಲಿರುವವರನ್ನು ಮಂತ್ರಮುಗ್ಧರಾಗಿಸುತ್ತದೆ. ನೀವು ಇಂದು ಮತ್ತಷ್ಟು ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸಬಹುದು. ವೃತ್ತಿಪರವಾಗಿ, ನೀವು ಅತ್ಯಂತ ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತೀರಿ. ಬರಲಿರುವ ಸಮಯಕ್ಕಾಗಿ ಎಚ್ಚರವಾಗಿರಿ.

ಧನು : ಇಂದು ನಿಮಗೆ ಗೆಲುವು-ಗೆಲುವು ದೊರೆಯುವ ದಿನವಾಗಿದೆ. ಯಾವುದೇ ಸವಾಲನ್ನು ತೆಗೆದುಕೊಳ್ಳಿ, ಯಶಸ್ಸಿನ ಚೆಂಡು ನಿಮ್ಮ ಅಂಗಳದಲ್ಲಿರುತ್ತದೆ. ನೀವು ಇಂದು ನಿಮ್ಮ ಅಧೀನದ ಉದ್ಯೋಗಿಗಳನ್ನು ಮುನ್ನಡೆಸುವ ಕಿಂದರಿಜೋಗಿಯಾಗುತ್ತೀರಿ, ಅವರು ನಿಮ್ಮ ಮಾರ್ಗದರ್ಶನ ಕೇಳುತ್ತಾರೆ. ನಿಮ್ಮ ನಾಯಕತ್ವ ಅವರನ್ನು ಪ್ರೇರೇಪಿಸುತ್ತದೆ ಮತ್ತು ಇದು ದಿನದ ಅಂತ್ಯಕ್ಕೆ ನಿಮ್ಮನ್ನು ಸಂತೋಷದ ಜೀವವಾಗಿಸುತ್ತದೆ.

ಮಕರ : ಭಾವುಕರಾಗುವುದು ಅನುಕೂಲಕರವಲ್ಲ. ಇದು ನಿಮ್ಮ ವೃತ್ತಿ ಅಥವಾ ವೈಯಕ್ತಿಕ ಜೀವನದ ದಾರಿಯಲ್ಲಿ ಬರುತ್ತದೆ. ನಿಮ್ಮ ಸುತ್ತಲೂ ಇರುವವರು ಇದನ್ನು ಅವರ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಮತ್ತು ನಿಮ್ಮ ಕಾಲೆಳೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಯಶಸ್ಸಿನಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.

ಕುಂಭ : ನೀವು ಇಂದು ಅತ್ಯಂತ ಹುರುಪು ಮತ್ತು ಅತ್ಯಂತ ಉತ್ಸಾಹದಲ್ಲಿರುವುದರಿಂದ ನಿಮ್ಮ ಪ್ರತಿಸ್ಪರ್ಧಿಗಳು ಆಶ್ಚರ್ಯಪಡುತ್ತಾರೆ. ನೀವು ಇಂದು ಕಾಣುವುದೆಲ್ಲಾ ಮಾನದಂಡ ರೂಪಿಸುವುದು ಮತ್ತು ಅದಕ್ಕಾಗಿ ಎಲ್ಲ ಅಡೆತಡೆಗಳೂ ಕಣ್ಮರೆಯಾಗುವಂತೆ ಕಾಣುತ್ತವೆ. ನಿಮ್ಮ ಸುತ್ತಲಿರುವ ಎಲ್ಲರ ಹೃದಯಗಳನ್ನು ಯಶಸ್ಸು, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದಿಂದ ಆಳುತ್ತೀರಿ.

ಮೀನ : ನಿಮ್ಮ ಮನಸ್ಸು ಇಂದು ಅತ್ಯಂತ ಜಾಣ್ಮೆಯಿಂದಿರುತ್ತದೆ. ನೀವು ನಿಸರ್ಗದಲ್ಲಿ ತೊಡಗಿಕೊಳ್ಳುತ್ತೀರಿ ಮತ್ತು ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ವಿಧಿ ನಿಮ್ಮನ್ನು ಯಶಸ್ಸಿನತ್ತ ಮಾರ್ಗದರ್ಶನ ಮಾಡುತ್ತದೆ. ನೀವು ವೃತ್ತಿಪರವಾಗುವುದಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ವಾಲುವ ಸಾಧ್ಯತೆ ಇದೆ. ನೀವು ಯಾವುದೇ ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನುವುದನ್ನು ನೋಡಿಕೊಳ್ಳಿ.

sambrama prabha editor suresh kt

LEAVE A REPLY

Please enter your comment!
Please enter your name here