ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ

0
45

Updated By: Priyalachhi

ಬೆಳಗಾವಿ: “ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಅಧಿಕಾರ” ಎನ್ನುವ ಮೂಲಕ‌ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಬಿಟ್ಟು ಕೊಡುವವರೆಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರ ಸಿಗುವುದಿಲ್ಲ ಅಂತಾ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ. ಮತ್ತೊಂದು ಯಗಾದಿ ಫಲ ಅಂತಾ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ದೊಡ್ಡ ದೊಡ್ಡ ವ್ಯಾಪಾರಸ್ಥರು, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು” ಎಂದರು.

“ಯುಗಾದಿ ಕಳೆದ ಮೇಲೆ ಮಳೆ, ಬೆಳೆ, ರೈತರು, ಭೂಮಿ ಬಗ್ಗೆ ಹೇಳಬಹುದು. ಆದರೆ, ಈಗ ಅತಂತ್ರ ಇದೆ. ಹಾಗಾಗಿ ಈಗ ಭವಿಷ್ಯ ಹೇಳುವುದು ಕಷ್ಟ.‌ 2025ಕ್ಕಿಂತ 2026 ಹೆಚ್ಚು ಕಷ್ಟ ಇದೆ. 8-10 ಪರ್ಸಂಟ್ ಜಗತ್ತೇ ಮುಳುಗಿ ಹೋಗುವ ಲಕ್ಷಣ ಇದೆ. ಯಗಾದಿಗೆ ಅದನ್ನು ಹೇಳುವೆ” ಎಂದು ಸ್ವಾಮೀಜಿ ಆತಂಕದ ಭವಿಷ್ಯ ನುಡಿದರು.
sambrama prabha editor suresh kt

LEAVE A REPLY

Please enter your comment!
Please enter your name here