Updated By: Priyalachhi
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲಲು ಮತದಾನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಅವರ ಜನರ ಹೃದಯವನ್ನು ಹ್ಯಾಕ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನಡೆದ ‘ಚುನಾವಣೆ ಸುಧಾರಣೆ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಣಾವತ್, ಪ್ರತಿಪಕ್ಷಗಳ ಸದಸ್ಯರು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕಳೆದ ವರ್ಷ ತೀವ್ರ ಆಘಾತವಾಗಿತ್ತು. ಅವರನ್ನು ಆಗಾಗ್ಗೆ ಹಾಗೆ ನೋಡುವುದು ಆಘಾತಕಾರಿ ಎಂದು ಹೇಳಿದರು.
ವಿಪಕ್ಷ ಸಂಸದರು ಪದೇ ಪದೇ ಸದನದ ಬಾವಿಗಿಳಿದು SIR, SIR’ಎಂದು ಕೂಗಿ ಸಾಧ್ಯವಾದಷ್ಟು ಎಲ್ಲಾ ಮಾರ್ಗಗಳಲ್ಲಿ ಬೆದರಿಕೆ, ಅನುಚಿತ ವರ್ತನೆ ಮಾಡಲು ಪ್ರಯತ್ನಿಸಿದರು. ಈ ಅಡ್ಡಿಯಿಂದ ಸಂಸತ್ ಕಲಾಪ ಸುಗಮವಾಗಿ ಸಾಗಿರಲಿಲ್ಲ .ಕಳೆದ ಎರಡೂ ಮೂರು ದಿನ ಹೊರತುಪಡಿಸಿದರೆ ಬಹುತೇಕ ಅವರು ಸದನ ನಡೆಯಲು ಅವಕಾಶ ನೀಡಿರಲಿಲ್ಲ ಎಂದರು.
ನಾವು ಜನರ ಪ್ರತಿನಿಧಿಗಳು, ಹೊಸ ಸಂಸದರಾಗಿ ಇಲ್ಲಿಗೆ ಬಂದಿರುವ ನಾವು ಕಲಿಯುವುದು ಸಾಕಷ್ಟಿದೆ. ವಿಪಕ್ಷಗಳ ಸದಸ್ಯರು ಪ್ರತಿಯೊಂದು ಅಧಿವೇಶನವನ್ನು ರಂಗಮಂದಿರವನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.



