ಧರ್ಮೇಂದ್ರ, ವಿ.ಎಸ್.ಅಚ್ಯುತಾನಂದನ್ ಸೇರಿ ಐವರು ‘ಪದ್ಮವಿಭೂಷಣ’

0
49

Updated By: Priyalachhi

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಭಾನುವಾರ) ಸಂಜೆ ಘೋಷಿಸಿತು. ಈ ಬಾರಿ ಒಟ್ಟು 5 ಮಂದಿ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಇವರ ಪೈಕಿ ಬಾಲಿವುಡ್‌ನ ಹೆಸರಾಂತ ಹಿರಿಯ ನಟ ದಿ.ಧರ್ಮೇಂದ್ರ, ಕೇರಳದ ಮಾಜಿ ಸಿಎಂ ದಿ.ವಿ.ಎಸ್.ಅಚ್ಯುತಾನಂದನ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 13 ಗಣ್ಯರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿದೆ. ಈ ಪೈಕಿ ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಶ್ರೇಷ್ಠ ಕೊಡುಗೆಗಳಿಗಾಗಿ ಕರ್ನಾಟಕದ ಶತಾವಧಾನಿ ಆರ್.ಗಣೇಶ್, ಕೇರಳದ ಪ್ರಸಿದ್ಧ ಸಿನಿಮಾ ತಾರೆ ಮಮ್ಮುಟ್ಟಿ ಸೇರಿದಂತೆ 13 ಗಣ್ಯರಿದ್ದಾರೆ. ಒಟ್ಟು 131 ಸಾಧಕರನ್ನು ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ಪದ್ಮ ವಿಭೂಷಣ ಪ್ರಶಸ್ತಿ’ ಪುರಸ್ಕೃತರು:

  • ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ), ಕಲೆ, ಮಹಾರಾಷ್ಟ್ರ
  • ಕೆ.ಟಿ.ಥಾಮಸ್, ಸಾರ್ವಜನಿಕ ವ್ಯವಹಾರಗಳು, ಕೇರಳ
  • ಶ್ರೀಮತಿ ಎನ್.ರಾಜಮ್, ಕಲೆ, ಉತ್ತರ ಪ್ರದೇಶ
  • ಪಿ.ನಾರಾಯಣನ್, ಸಾಹಿತ್ಯ ಮತ್ತು ಶಿಕ್ಷಣ, ಕೇರಳ
  • ವಿ.ಎಸ್.ಅಚ್ಯುತಾನಂದನ್ (ಮರಣೋತ್ತರ) ಸಾರ್ವಜನಿಕ ವ್ಯವಹಾರಗಳು ಕೇರಳ

‘ಪದ್ಮಭೂಷಣ ಪ್ರಶಸ್ತಿ’ ಪುರಸ್ಕೃತರು:

  • ಶ್ರೀಮತಿ ಅಲ್ಕಾ ಯಾಗ್ನಿಕ್, ಕಲೆ, ಮಹಾರಾಷ್ಟ್ರ
  • ಭಗತ್ ಸಿಂಗ್ ಕೋಶ್ಯಾರಿ, ಸಾರ್ವಜನಿಕ ವ್ಯವಹಾರಗಳು, ಉತ್ತರಾಖಂಡ
  • ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ, ಮೆಡಿಸಿನ್, ತಮಿಳುನಾಡು
  • ಮಮ್ಮುಟ್ಟಿ, ಕಲೆ, ಕೇರಳ
  • ಡಾ.ನೋರಿ ದತ್ತಾತ್ರೇಯುಡು, ಮೆಡಿಸಿನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ
  • ಪಿಯೂಷ್ ಪಾಂಡೆ (ಮರಣೋತ್ತರ), ಕಲೆ, ಮಹಾರಾಷ್ಟ್ರ
  • ಎಸ್.ಕೆ.ಎಂ.ಮೈಲಾನಂದನ್, ಸಮಾಜ ಕಾರ್ಯ, ತಮಿಳುನಾಡು
  • ಶತಾವಧಾನಿ ಆರ್.ಗಣೇಶ್,ಕಲೆ, ಕರ್ನಾಟಕ
  • ಶಿಬು ಸೊರೆನ್ (ಮರಣೋತ್ತರ), ಸಾರ್ವಜನಿಕ ವ್ಯವಹಾರಗಳು, ಜಾರ್ಖಂಡ್
  • ಉದಯ್ ಕೋಟಕ್, ವ್ಯಾಪಾರ ಮತ್ತು ಉದ್ಯಮ, ಮಹಾರಾಷ್ಟ್ರ
  • ವಿ ಕೆ ಮಲ್ಹೋತ್ರಾ (ಮರಣೋತ್ತರ), ಸಾರ್ವಜನಿಕ ವ್ಯವಹಾರಗಳು, ದೆಹಲಿ
  • ವೆಲ್ಲಪ್ಪಳ್ಳಿ ನಟೇಶನ್, ಸಾರ್ವಜನಿಕ ವ್ಯವಹಾರಗಳು, ಕೇರಳ
  • ವಿಜಯ್ ಅಮೃತರಾಜ್, ಕ್ರೀಡೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ

ಪದ್ಮಶ್ರೀ ಪ್ರಶಸ್ತ್ರಿ ಪುರಸ್ಕೃತರು:

  • ಎ.ಇ.ಮುತ್ತುನಾಯಗಂ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಕೇರಳ
  • ಅನಿಲ್ ಕುಮಾರ್ ರಸ್ತೋಗಿ, ಕಲೆ, ಉತ್ತರ ಪ್ರದೇಶ
  • ಅಂಕೇಗೌಡ ಎಂ. ಸಮಾಜಕಾರ್ಯ, ಕರ್ನಾಟಕ
  • ಅರ್ಮಿಡಾ ಫೆರ್ನಾಂಡಿಸ್, ಮೆಡಿಸಿನ್, ಮಹಾರಾಷ್ಟ್ರ
  • ಅರವಿಂದ್ ವೈದ್ಯ, ಕಲೆ, ಗುಜರಾತ್
  • ಅಶೋಕ್ ಖಾಡೆ, ವ್ಯಾಪಾರ ಮತ್ತು ಕೈಗಾರಿಕೆ, ಮಹಾರಾಷ್ಟ್ರ
  • ಅಶೋಕ್ ಕುಮಾರ್ ಸಿಂಗ್, ವಿಜ್ಞಾನ ಮತ್ತು ಎಂಜಿನಿಯರಿಂಗ್, ಉತ್ತರ ಪ್ರದೇಶ
  • ಅಶೋಕ್ ಕುಮಾರ್ ಹಲ್ದಾರ್, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಳ
  • ಬಲದೇವ್ ಸಿಂಗ್, ಕ್ರೀಡೆ, ಪಂಜಾಬ್
  • ಭಗವಾಂದಾಸ್ ರೈಕ್ವಾರ್, ಕ್ರೀಡೆ, ಮಧ್ಯಪ್ರದೇಶ
  • ಭರತ್ ಸಿಂಗ್ ಭಾರತಿ, ಕಲೆ, ಬಿಹಾರ
  • ಭಿಕ್ಲ್ಯಾ ಲಡಾಕ್ಯ ದಿಂಡಾ, ಕಲೆ, ಮಹಾರಾಷ್ಟ್ರ
  • ಬಿಶ್ವ ಬಂಧು, (ಮರಣೋತ್ತರ) ಕಲೆ, ಬಿಹಾರ
  • ಬ್ರಿಜ್ ಲಾಲ್ ಭಟ್, ಸಮಾಜ ಕಾರ್ಯ, ಜಮ್ಮು ಮತ್ತು ಕಾಶ್ಮೀರ
  • ಬುದ್ಧ ರಶ್ಮಿ ಮಣಿ ಇತರರು, ಪುರಾತತ್ವ ಶಾಸ್ತ್ರ, ಉತ್ತರ ಪ್ರದೇಶ
  • ಡಾ.ಬುಧ್ರಿ ತಾಟಿ, ಸಮಾಜ ಕಾರ್ಯ, ಛತ್ತೀಸ್‌ಗಢ
  • ಚಂದ್ರಮೌಳಿ ಗಡ್ಡಮನುಗು, ವಿಜ್ಞಾನ ಮತ್ತು ಎಂಜಿನಿಯರಿಂಗ್, ತೆಲಂಗಾಣ
  • ಚರಣ್ ಹೆಂಬ್ರಾಮ್, ಸಾಹಿತ್ಯ ಮತ್ತು ಶಿಕ್ಷಣ, ಒಡಿಶಾ
  • ಚಿರಂಜಿ ಲಾಲ್ ಯಾದವ್, ಕಲೆ, ಉತ್ತರ ಪ್ರದೇಶ
  • ಶ್ರೀಮತಿ ದೀಪಿಕಾ ರೆಡ್ಡಿ ಆರ್ಟ್ ತೆಲಂಗಾಣ
  • ಧಾರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ, ಕಲೆ, ಗುಜರಾತ್
  • ಗದ್ದೆ ಬಾಬು ರಾಜೇಂದ್ರ ಪ್ರಸಾದ್, ಕಲೆ, ಆಂಧ್ರಪ್ರದೇಶ
  • ಗಫ್ರುದ್ದೀನ್ ಮೇವಾಟಿ ಜೋಗಿ, ಕಲೆ, ರಾಜಸ್ಥಾನ
  • ಗಂಭೀರ್ ಸಿಂಗ್ ಯೋನ್ಜೋನ್, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಳ
  • ಗರಿಮೆಲ್ಲ ಬಾಲಕೃಷ್ಣ ಪ್ರಸಾದ್, (ಮರಣೋತ್ತರ), ಕಲೆ, ಆಂಧ್ರಪ್ರದೇಶ
  • ಶ್ರೀಮತಿ ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ಶ್ರೀಮತಿ ರಂಜನಿ ಬಾಲಸುಬ್ರಮಣಿಯನ್ (ದ್ವಂದ್ವ), ಕಲೆ, ತಮಿಳುನಾಡು
  • ಗೋಪಾಲ್ ಜಿ ತ್ರಿವೇದಿ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಬಿಹಾರ
  • ಗುಡೂರು ವೆಂಕಟ್ ರಾವ್, ಮೆಡಿಸಿನ್, ತೆಲಂಗಾಣ
  • ಎಚ್.ವಿ.ಹಂದೆ, ಔಷಧ, ತಮಿಳುನಾಡು
  • ಹಾಲಿ ವಾರ್, ಸಮಾಜ ಕಾರ್ಯ, ಮೇಘಾಲಯ
  • ಹರಿ ಮಾಧಬ್ ಮುಖೋಪಾಧ್ಯಾಯ, (ಮರಣೋತ್ತರ) ಕಲೆ, ಪಶ್ಚಿಮ ಬಂಗಾಳ
  • ಹರಿಚರಣ್ ಸೈಕಿಯಾ, ಕಲೆ, ಅಸ್ಸಾಂ
  • ಶ್ರೀಮತಿ ಹರ್ಮನ್‌ಪ್ರೀತ್ ಕೌರ್ ಭುಲ್ಲರ್, ಕ್ರೀಡೆ, ಪಂಜಾಬ್
  • ಇಂದರ್‌ಜಿತ್ ಸಿಂಗ್ ಸಿಧು, ಸಮಾಜ ಕಾರ್ಯ, ಚಂಡೀಗಢ
  • ಜನಾರ್ದನ್ ಬಾಪುರಾವ್ ಬೋಥೆ, ಸಮಾಜಕಾರ್ಯ, ಮಹಾರಾಷ್ಟ್ರ
  • ಜೋಗೇಶ್ ದೇರಿ ಇತರರು, ಕೃಷಿ, ಅಸ್ಸಾಂ
  • ಜುಜರ್ ವಾಸಿ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಮಹಾರಾಷ್ಟ್ರ
  • ಜ್ಯೋತಿಶ್ ದೇಬನಾಥ್, ಕಲೆ, ಪಶ್ಚಿಮ ಬಂಗಾಳ
  • ಕೆ.ಪಜನಿವೇಲ್, ಕ್ರೀಡೆ, ಪುದುಚೆರಿ
  • ಕೆ.ರಾಮಸಾಮಿ, ವಿಜ್ಞಾನ ಮತ್ತು ಎಂಜಿನಿಯರಿಂಗ್, ತಮಿಳುನಾಡು
  • ಕೆ.ವಿಜಯ್ ಕುಮಾರ್, ನಾಗರಿಕ ಸೇವೆ, ತಮಿಳುನಾಡು
  • ಕಬೀಂದ್ರ ಪುರಕಾಯಸ್ಥ (ಮರಣೋತ್ತರ) ಸಾರ್ವಜನಿಕ ವ್ಯವಹಾರಗಳು, ಅಸ್ಸಾಂ
  • ಕೈಲಾಶ್ ಚಂದ್ರ ಪಂತ್, ಸಾಹಿತ್ಯ ಮತ್ತು ಶಿಕ್ಷಣ, ಮಧ್ಯಪ್ರದೇಶ
  • ಶ್ರೀಮತಿ ಕಲಾಮಂಡಲಂ ವಿಮಲಾ ಮೆನನ್, ಕಲೆ, ಕೇರಳ
  • ಕೇವಲ್ ಕ್ರಿಶನ್ ಥಕ್ರಾಲ್, ಮೆಡಿಸಿನ್, ಉತ್ತರ ಪ್ರದೇಶ
  • ಖೇಮ್ ರಾಜ್ ಸುಂಡ್ರಿಯಾಲ್, ಕಲೆ, ಹರಿಯಾಣ
  • ಶ್ರೀಮತಿ ಕೊಲ್ಲಕಲ್ ದೇವಕಿ ಅಮ್ಮ ಜಿ, ಸಮಾಜಕಾರ್ಯ, ಕೇರಳ
  • ಕೃಷ್ಣಮೂರ್ತಿ ಬಾಲಸುಬ್ರಮಣಿಯನ್, ವಿಜ್ಞಾನ ಮತ್ತು ಎಂಜಿನಿಯರಿಂಗ್, ತೆಲಂಗಾಣ
  • ಕುಮಾರ್ ಬೋಸ್, ಕಲೆ, ಪಶ್ಚಿಮ ಬಂಗಾಳ
  • ಕುಮಾರಸಾಮಿ ತಂಗರಾಜ್, ವಿಜ್ಞಾನ ಮತ್ತು ಎಂಜಿನಿಯರಿಂಗ್, ತೆಲಂಗಾಣ
  • ಪ್ರೊ.(ಡಾ.)ಲಾರ್ಸ್-ಕ್ರಿಶ್ಚಿಯನ್ ಕೋಚ್, ಕಲೆ, ಜರ್ಮನಿ
  • ಶ್ರೀಮತಿ ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ, ಸಾಹಿತ್ಯ ಮತ್ತು ಶಿಕ್ಷಣ, ರಷ್ಯಾ
  • ಮಾಧವನ್ ರಂಗನಾಥನ್, ಕಲೆ, ಮಹಾರಾಷ್ಟ್ರ
  • ಮಗಂತಿ ಮುರಳಿ ಮೋಹನ್, ಕಲೆ, ಆಂಧ್ರಪ್ರದೇಶ
  • ಮಹೇಂದ್ರ ಕುಮಾರ್ ಮಿಶ್ರಾ, ಸಾಹಿತ್ಯ ಮತ್ತು ಶಿಕ್ಷಣ, ಒಡಿಶಾ
  • ಮಹೇಂದ್ರ ನಾಥ್ ರಾಯ್, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಳ
  • ಮಮಿದಲ ಜಗದೀಶ್ ಕುಮಾರ್, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
  • ಶ್ರೀಮತಿ ಮಂಗಳಾ ಕಪೂರ್, ಸಾಹಿತ್ಯ ಮತ್ತು ಶಿಕ್ಷಣ, ಉತ್ತರ ಪ್ರದೇಶ
  • ಮೀರ್ ಹಾಜಿಭಾಯಿ ಕಾಸಂಭಾಯ್, ಕಲೆ, ಗುಜರಾತ್
  • ಮೋಹನ್ ನಗರ, ಸಮಾಜಕಾರ್ಯ, ಮಧ್ಯಪ್ರದೇಶ
  • ನಾರಾಯಣ ವ್ಯಾಸ್ ಇತರರು, ಪುರಾತತ್ತ್ವ ಶಾಸ್ತ್ರ, ಮಧ್ಯ ಪ್ರದೇಶ
  • ನರೇಶ್ ಚಂದ್ರ ದೇವ್ ವರ್ಮಾ, ಸಾಹಿತ್ಯ ಮತ್ತು ಶಿಕ್ಷಣ, ತ್ರಿಪುರ
  • ನೀಲೇಶ್ ವಿನೋದಚಂದ್ರ ಮಾಂಡ್ಲೇವಾಲಾ, ಸಮಾಜಕಾರ್ಯ, ಗುಜರಾತ್
  • ನೂರುದ್ದೀನ್ ಅಹ್ಮದ್, ಕಲೆ, ಅಸ್ಸಾಂ
  • ಒತ್ತುವಾರ್ ತಿರುತ್ತಣಿ ಸ್ವಾಮಿನಾಥನ್, ಕಲೆ, ತಮಿಳುನಾಡು
  • ಡಾ.ಪದ್ಮಾ ಗುರ್ಮೆಟ್, ಮೆಡಿಸಿನ್, ಲಡಾಖ್
  • ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ, ಮೆಡಿಸಿನ್, ತೆಲಂಗಾಣ
  • ಶ್ರೀಮತಿ ಪೋಖಿಲಾ ಲೆಕ್ತೇಪಿ, ಕಲಾ, ಅಸ್ಸಾಂ
  • ಡಾ.ಪ್ರಭಾಕರ ಬಸವಪ್ರಭು ಕೋರೆ, ಸಾಹಿತ್ಯ ಮತ್ತು ಶಿಕ್ಷಣ, ಕರ್ನಾಟಕ
  • ಪ್ರತೀಕ್ ಶರ್ಮಾ, ಮೆಡಿಸಿನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ
  • ಪ್ರವೀಣ್ ಕುಮಾರ್, ಕ್ರೀಡೆ, ಉತ್ತರ ಪ್ರದೇಶ
  • ಪ್ರೇಮ್ ಲಾಲ್ ಗೌತಮ್, ವಿಜ್ಞಾನ ಮತ್ತು ಎಂಜಿನಿಯರಿಂಗ್, ಹಿಮಾಚಲ ಪ್ರದೇಶ
  • ಪ್ರೊಸೆನ್ಜಿತ್ ಚಟರ್ಜಿ, ಕಲೆ, ಪಶ್ಚಿಮ ಬಂಗಾಳ
  • ಡಾ.ಪುನ್ನಿಮೂರ್ತಿ ನಟೇಶನ್, ಔಷಧ, ತಮಿಳುನಾಡು
  • ಆರ್.ಕೃಷ್ಣನ್ (ಮರಣೋತ್ತರ), ಕಲೆ, ತಮಿಳುನಾಡು
  • ಆರ್.ವಿ.ಎಸ್.ಮಣಿ, ನಾಗರಿಕ ಸೇವೆ, ದೆಹಲಿ
  • ರಬಿಲಾಲ್ ತುಡು, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಳ
  • ರಘುಪತ್ ಸಿಂಗ್, (ಮರಣೋತ್ತರ) ಇತರೆ – ಕೃಷಿ ಉತ್ತರ ಪ್ರದೇಶ
  • ರಘುವೀರ್ ತುಕಾರಾಂ ಖೇಡ್ಕರ್,ಕಲೆ, ಮಹಾರಾಷ್ಟ್ರ
  • ರಾಜಸ್ತಪತಿ ಕಾಳಿಯಪ್ಪ ಗೌಂಡರ್, ಕಲೆ, ತಮಿಳುನಾಡು
  • ರಾಜೇಂದ್ರ ಪ್ರಸಾದ್, ಔಷಧ, ಉತ್ತರ ಪ್ರದೇಶ
  • ಶ್ರೀರಾಮ ರೆಡ್ಡಿ ಮಾಮಿಡಿ (ಮರಣೋತ್ತರ), ಇತರೆ – ಪಶುಪಾಲನೆ, ತೆಲಂಗಾಣ
  • ರಾಮಮೂರ್ತಿ ಶ್ರೀಧರ್ ಇತರರು – ರೇಡಿಯೋ ಬ್ರಾಡ್ಕಾಸ್ಟಿಂಗ್, ದೆಹಲಿ
  • ರಾಮಚಂದ್ರ ಗೋಡ್ಬೋಲೆ ಮತ್ತು ಶ್ರೀಮತಿ ಸುನೀತಾ ಗೋಡ್ಬೋಲೆ (ಜೋಡಿ), ಮೆಡಿಸಿನ್, ಛತ್ತೀಸ್‌ಗಢ
  • ರತಿಲಾಲ್ ಬೋರಿಸಾಗರ್, ಸಾಹಿತ್ಯ ಮತ್ತು ಶಿಕ್ಷಣ, ಗುಜರಾತ್
  • ರೋಹಿತ್ ಶರ್ಮಾ, ಕ್ರೀಡೆ, ಮಹಾರಾಷ್ಟ್ರ
  • ಶ್ರೀಮತಿ ಎಸ್.ಜಿ.ಸುಶೀಲಮ್ಮ, ಸಮಾಜಕಾರ್ಯ, ಕರ್ನಾಟಕ
  • ಶ್ರೀ ಸಂಗ್ಯುಸಾಂಗ್ ಎಸ್ ಪೊಂಗೆನರ್ ಆರ್ಟ್ ನಾಗಾಲ್ಯಾಂಡ್
  • ಸಂತ ನಿರಂಜನ್ ದಾಸ್ ಇತರರು, ಆಧ್ಯಾತ್ಮಿಕತೆ, ಪಂಜಾಬ್
  • ಶರತ್ ಕುಮಾರ್ ಪತ್ರ, ಕಲೆ, ಒಡಿಶಾ
  • ಸರೋಜ್ ಮಂಡಲ್, ಮೆಡಿಸಿನ್, ಪಶ್ಚಿಮ ಬಂಗಾಳ
  • ಸತೀಶ್ ಶಾ (ಮರಣೋತ್ತರ), ಕಲೆ, ಮಹಾರಾಷ್ಟ್ರ
  • ಸತ್ಯನಾರಾಯಣ ನುವಾಲ್, ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
  • ಶ್ರೀಮತಿ ಸವಿತಾ ಪುನಿಯಾ, ಸ್ಪೋರ್ಟ್ಸ್, ಹರಿಯಾಣ
  • ಪ್ರೊ.ಶಾಫಿ ಶೌಕ್ ಸಾಹಿತ್ಯ ಮತ್ತು ಶಿಕ್ಷಣ ಜಮ್ಮು ಮತ್ತು ಕಾಶ್ಮೀರ
  • ಶಶಿ ಶೇಖರ್ ವೆಂಪತಿ, ಸಾಹಿತ್ಯ ಮತ್ತು ಶಿಕ್ಷಣ, ಕರ್ನಾಟಕ
  • ಶ್ರೀರಂಗ್ ದೇವಬ ಲಾಡ್ ಇತರರು, ಕೃಷಿ, ಮಹಾರಾಷ್ಟ್ರ
  • ಶ್ರೀಮತಿ ಶುಭಾ ವೆಂಕಟೇಶ ಅಯ್ಯಂಗಾರ್, ವಿಜ್ಞಾನ ಮತ್ತು ಎಂಜಿನಿಯರಿಂಗ್, ಕರ್ನಾಟಕ
  • ಶ್ಯಾಮ್ ಸುಂದರ್, ಮೆಡಿಸಿನ್, ಉತ್ತರ ಪ್ರದೇಶ
  • ಸಿಮಾಂಚಲ್ ಪಾತ್ರೋ, ಕಲೆ, ಒಡಿಶಾ
  • ಶ್ರೀಮತಿ ಶಿವಶಂಕರಿ, ಸಾಹಿತ್ಯ ಮತ್ತು ಶಿಕ್ಷಣ, ತಮಿಳುನಾಡು
  • ಡಾ.ಸುರೇಶ ಹನಗವಾಡಿ, ಔಷಧ, ಕರ್ನಾಟಕ
  • ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್, ಸಮಾಜ ಕಾರ್ಯ, ರಾಜಸ್ಥಾನ
  • ಟಿ.ಟಿ.ಜಗನ್ನಾಥನ್, (ಮರಣೋತ್ತರ), ವ್ಯಾಪಾರ ಮತ್ತು ಕೈಗಾರಿಕೆ. ಕರ್ನಾಟಕ
  • ತಗಾ ರಾಮ್ ಭೀಲ್, ಕಲೆ, ರಾಜಸ್ಥಾನ
  • ತರುಣ್ ಭಟ್ಟಾಚಾರ್ಯ, ಕಲೆ, ಪಶ್ಚಿಮ ಬಂಗಾಳ
  • ಟೆಕಿ ಗುಬಿನ್, ಸಮಾಜ ಕಾರ್ಯ, ಅರುಣಾಚಲ ಪ್ರದೇಶ
  • ತಿರುವಾರೂರ್ ಭಕ್ತವತ್ಸಲಂ, ಕಲೆ, ತಮಿಳುನಾಡು
  • ಶ್ರೀಮತಿ ತ್ರಿಪ್ತಿ ಮುಖರ್ಜಿ, ಕಲೆ, ಪಶ್ಚಿಮ ಬಂಗಾಳ
  • ವೀಜಿನಾಥನ್ ಕಾಮಕೋಟಿ, ವಿಜ್ಞಾನ ಮತ್ತು ಎಂಜಿನಿಯರಿಂಗ್, ತಮಿಳುನಾಡು
  • ವೆಂಪಟಿ ಕುಟುಂಬ ಶಾಸ್ತ್ರಿ, ಸಾಹಿತ್ಯ ಮತ್ತು ಶಿಕ್ಷಣ, ಆಂಧ್ರ ಪ್ರದೇಶ
  • ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ) ಕ್ರೀಡೆ, ಜಾರ್ಜಿಯಾ
  • ಯುಮ್ನಮ್ ಜಾತ್ರಾ ಸಿಂಗ್ (ಮರಣೋತ್ತರ) ಕಲೆ, ಮಣಿಪುರ

ಪ್ರಶಸ್ತಿ ಪುರಸ್ಕೃತರಲ್ಲಿ 19 ಮಂದಿ ಮಹಿಳೆಯರು ಮತ್ತು ಪಟ್ಟಿಯಲ್ಲಿ ವಿದೇಶಿಯರು/ಎನ್‌ಆರ್‌ಐ-ಅನಿವಾಸಿ ಭಾರತೀಯರು/ಪಿಐಒ/ಒಸಿಐ ವರ್ಗದಿಂದ 6 ವ್ಯಕ್ತಿಗಳು ಮತ್ತು 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರಿದ್ದಾರೆ.

ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ವಿವಿಧ ವಿಭಾಗಗಳು ಅಥವಾ ಚಟುವಟಿಕೆಗಳ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ‘ಪದ್ಮವಿಭೂಷಣ’, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ‘ಪದ್ಮಭೂಷಣ’ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ‘ಪದ್ಮಶ್ರೀ’ ನೀಡಲಾಗುತ್ತದೆ. ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸುವುದು ಸಂಪ್ರದಾಯ.

sambrama prabha editor suresh kt

LEAVE A REPLY

Please enter your comment!
Please enter your name here