ರಾಜಕಾರಣ ನಿಂತ ನೀರಲ್ಲ. ಯಾರ್ಯಾರು ಏನೇನಾಗ್ತಾರೋ ಗೊತ್ತಿಲ್ಲ: ಮಾಜಿ ಸಚಿವ ಕೆ.ಎನ್.ರಾಜಣ್ಣ

0
62

Updated By: Priyalachhi 

ಬೆಂಗಳೂರು: ಬಜೆಟ್‌ವರೆಗೆ ಏನೂ‌ ಆಗುವುದಿಲ್ಲ. ಅಲ್ಲಿವರೆಗೆ ಏನೂ ಮಾತನಾಡೋಕೆ‌ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆಗಳು ಬೇಡ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.‌

ಬೆಂಗಳೂರಲ್ಲಿಂದು ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.‌ ಬಜೆಟ್‌ವರೆಗೆ ಏನೂ‌ ಆಗದು. ಅಲ್ಲಿಯವರೆಗೆ ಏನೂ ಮಾತನಾಡೋಕೆ‌ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆ ಬೇಡ. ಸಿದ್ದರಾಮಯ್ಯನವರು ಈಗಲೂ ಇರಬೇಕು, 2028ಕ್ಕೂ ಇರಬೇಕು ಅಂತ ಹೇಳಿದ್ದೇನೆ. ಅದರ ಬಗ್ಗೆ ಯಾಕೆ ನೀವು ಹೇಳಲ್ಲ ಎಂದರು.

ಸಿಎಂ ವೈರಾಗ್ಯದ ಮಾತು ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ವೈರಾಗ್ಯದ ಮಾತು ಹೇಳಿಲ್ವಾ?. ಕಾರ್ಯಕರ್ತನಾಗಿ ಇರ್ತೇನೆ ಅಂತ ಹೇಳಿಲ್ವಾ?. ಕಾರ್ಯಕರ್ತ ಪರ್ಮನೆಂಟ್. ರಾಜಕಾರಣ ನಿಂತ ನೀರಲ್ಲ. ಚಲನಶೀಲತೆಯೇ ರಾಜಕಾರಣ. ಇವರಲ್ಲಿ ಯಾರ್ಯಾರು ಏನೇನಾಗ್ತಾರೆ ಗೊತ್ತಿಲ್ಲ. ಈಗಲೇ ಎಲ್ಲವನ್ನೂ ಊಹೆ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಹೈಕಮಾಂಡ್ ಪರಿಗಣಿಸಬಹುದು ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ, ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಇದೆ. ಬಸನಗೌಡ ದದ್ದಲ್ ಅದಕ್ಕೆ ಅಧ್ಯಕ್ಷರು. ಅದರ ಪೂರ್ವಭಾವಿ ತಯಾರಿ ಸಭೆ ಕರೆದಿದ್ದಾರೆ. ಅಲ್ಲಿ ಪ್ರೆಸ್​ಮೀಟ್​ ಕೂಡ ಇದೆ. ಅದಕ್ಕೆ ನಾವೆಲ್ಲರೂ ಹೋಗಬೇಕಿತ್ತು. ಕಾರಣಾಂತರಗಳಿಂದ ಹೋಗೋಕೆ‌ ಆಗಿಲ್ಲ. ಜಾತ್ರೆ ಯಶಸ್ಸಿಗೆ ಎಲ್ಲರೂ ಸಹಕಾರ ಕೊಡಬೇಕು. ಅದಕ್ಕೆ ಭೇಟಿಯಾಗಿದ್ದೆವು ಎಂದು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here